ಯಕ್ಷಕುಸುಮ ಗ್ರಂಥ ಬಿಡುಗಡೆ, ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಆಗಸ್ಟ್ 5 , 2013
|
ಮಂಗಳೂರು , ಆಗಸ್ಟ್ 5 , 2013
|
ಯಕ್ಷಕುಸುಮ ಗ್ರಂಥ ಬಿಡುಗಡೆ, ಸಮ್ಮಾನ
ಮಂಗಳೂರು :
ನಗರದ ಕೋಡಿಕಲ್ ಸರಯೂ ಬಾಲ ಯಕ್ಷ ವೃಂದ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ 'ಯಕ್ಷಕುಸುಮ' ಗ್ರಂಥ ಬಿಡುಗಡೆ ಹಾಗೂ ಅಶಕ್ತ ಕಲಾವಿದರ ಸಮ್ಮಾನ ಸಮಾರಂಭ ಆ. 11ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ವೃಂದದ ನಿರ್ದೇಶಕ ರವಿ ಅಲೆವೂರಾಯ ಅವರು ತಿಳಿಸಿದ್ದಾರೆ.
ಉದಯನಾವಡ ಮಧೂರು ಅವರನ್ನು 10 ಸಾವಿರ ರೂ. ಗೌರವ ನಿಧಿಯೊಂದಿಗೆ ಸಮ್ಮಾನಿಸಲಾಗುವುದು. ಬಳಿಕ ಯಕ್ಷ ಕುಸುಮ ಗ್ರಂಥ ಬಿಡುಗಡೆಗೊಳ್ಳಲಿದೆ. ಚೂಡಾಮಣಿ, ದಾಶರಥಿದರ್ಶನ, ವೀರ ಕುಶಲವ, ಶ್ರೀದೇವಿ ಮಹಿಷಮರ್ದಿನಿ, ವಿದ್ಯುನ್ಮತಿ ಕಲ್ಯಾಣ, ಜಾಂಬವತಿ ಕಲ್ಯಾಣ, ರತಿ ಕಲ್ಯಾಣ, ಸುಧನ್ವಮೋಕ್ಷ, ಸುದರ್ಶನ ವಿಜಯ, ತಾರಕಾಸುರ ವಧೆಗಳೆಂಬ ಹತ್ತು ಪ್ರಸಂಗಗಳ ಹಾಡು ಸಂಕಲನ ಮತ್ತು ಅರ್ಥ ವಿವರಣೆ ಪುಸ್ತಕದಲ್ಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ದುರ್ಗಾ ಮಕ್ಕಳ ಮೇಳ ಸಂಸ್ಥೆಯಿಂದ 'ಪಂಚವಟಿ' ಮತ್ತು ಸಂಜೆ 7ರಿಂದ ಸರಯೂ ತಂಡದಿಂದ 'ಶಾಂಭವಿ ವಿಜಯ' ಬಯಲಾಟಗಳು ನಡೆಯಲಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
|
|
|