ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಕುಸುಮ ಗ್ರಂಥ ಬಿಡುಗಡೆ, ಸಮ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಆಗಸ್ಟ್ 5 , 2013
ಮಂಗಳೂರು , ಆಗಸ್ಟ್ 5 , 2013

ಯಕ್ಷಕುಸುಮ ಗ್ರಂಥ ಬಿಡುಗಡೆ, ಸಮ್ಮಾನ

ಮಂಗಳೂರು : ನಗರದ ಕೋಡಿಕಲ್‌ ಸರಯೂ ಬಾಲ ಯಕ್ಷ ವೃಂದ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ 'ಯಕ್ಷಕುಸುಮ' ಗ್ರಂಥ ಬಿಡುಗಡೆ ಹಾಗೂ ಅಶಕ್ತ ಕಲಾವಿದರ ಸಮ್ಮಾನ ಸಮಾರಂಭ ಆ. 11ರಂದು ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ವೃಂದದ ನಿರ್ದೇಶಕ ರವಿ ಅಲೆವೂರಾಯ ಅವರು ತಿಳಿಸಿದ್ದಾರೆ.

ಉದಯನಾವಡ ಮಧೂರು ಅವರನ್ನು 10 ಸಾವಿರ ರೂ. ಗೌರವ ನಿಧಿಯೊಂದಿಗೆ ಸಮ್ಮಾನಿಸಲಾಗುವುದು. ಬಳಿಕ ಯಕ್ಷ ಕುಸುಮ ಗ್ರಂಥ ಬಿಡುಗಡೆಗೊಳ್ಳಲಿದೆ. ಚೂಡಾಮಣಿ, ದಾಶರಥಿದರ್ಶನ, ವೀರ ಕುಶಲವ, ಶ್ರೀದೇವಿ ಮಹಿಷಮರ್ದಿನಿ, ವಿದ್ಯುನ್ಮತಿ ಕಲ್ಯಾಣ, ಜಾಂಬವತಿ ಕಲ್ಯಾಣ, ರತಿ ಕಲ್ಯಾಣ, ಸುಧನ್ವಮೋಕ್ಷ, ಸುದರ್ಶನ ವಿಜಯ, ತಾರಕಾಸುರ ವಧೆಗಳೆಂಬ ಹತ್ತು ಪ್ರಸಂಗಗಳ ಹಾಡು ಸಂಕಲನ ಮತ್ತು ಅರ್ಥ ವಿವರಣೆ ಪುಸ್ತಕದಲ್ಲಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ದುರ್ಗಾ ಮಕ್ಕಳ ಮೇಳ ಸಂಸ್ಥೆಯಿಂದ 'ಪಂಚವಟಿ' ಮತ್ತು ಸಂಜೆ 7ರಿಂದ ಸರಯೂ ತಂಡದಿಂದ 'ಶಾಂಭವಿ ವಿಜಯ' ಬಯಲಾಟಗಳು ನಡೆಯಲಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ